ಒಬ್ಬೊಬ್ಬ ಸೂರ್ಯನ ಕೊಡಿ

ಅಕ್ಕ ತಂಗಿಯರೇ!
ಪ್ರತಿಯೊಬ್ಬರೂ ಒಬ್ಬೊಬ್ಬ ಸೂರ್ಯನನ್ನು ದೇಶಕ್ಕೆ ಕೊಡಿ
ಕನಿಷ್ಟ ಪಕ್ಷ ನಕ್ಷತ್ರವನ್ನಾಗಲೀ ಕೊನೆಗೆ ಹಣತೆಯನ್ನಾಗಲೀ ಕೊಡಿ

ಎರವಲು ಬೆಳಕಿನಿಂದ ಮೆರೆವ
ಗ್ರಹ ಉಪಗ್ರಹಗಳನ್ನೋ
ಉಲ್ಕೆಗಳನ್ನೋ ಕೊಡಬೇಡಿ

ಒಂದರೊಳಗೊಂದು ಸಿಕ್ಕಾ ಸಿಕ್ಕಾಗಿ ಗೋಜಲುಗೊಂಡು
ಒಂದನೊಂದು ಕಿತ್ತು ತಿನ್ನುವ ಕೆಲವು
ಹೆಗ್ಗಣ ಹದ್ದು ನಾಯಿ ನರಿಗಳಿಗಂಜಿ
ಪುತು ಪುತು ತಿಪ್ಪೆ ಸೇರಿಕೊಳ್ಳುವ
ಅಲ್ಲೇ ಕೈಲಾಸ ವೈಕುಂಠಗಳ ತೇಲುಗಣ್ಣಿನಲ್ಲಿ ಕಾಣುವ
ಬರೀ ಹುರುಳಿಲ್ಲದ ನರಳಾಟದ ನರಸತ್ತ
ನರಹುಳಗಳನ್ನು ಮಾತ್ರ ಕೊಡಬೇಡಿ

ತಮ್ಮ ತಮ್ಮೊಳಗೆ ಹೆಣೆದುಕೊಂಡ
ಬೇಲಿಗಳಿಗಾಗಿ ಇರಿದಾಡಿ ಸಾಯುವುದರಲ್ಲೇ
ತಮ್ಮ ಪೌರುಷ ಶೌರ್ಯಗಳನ್ನೆಲ್ಲ ಕಳೆದುಕೊಳ್ಳುತ್ತಿರುವ
ಮೃಗಗಳನ್ನು ಮಾತ್ರ ಕೊಡಬೇಡಿ
ಹೆಗ್ಗಣ ಹದ್ದು ನಾಯಿ ನರಿಗಳೇನಾದರೂ
ನಿಮ್ಮೊಡಲಿಂದ ಹುಟ್ಟಿದರೆ
ಹೆತ್ತವರಿಗೆ ಹೆಗ್ಗಣ ಮುದ್ದೆಂದು ಮುದ್ದಾಡಬೇಡಿ
ಪಾಪ ಎಂದು ಕರುಣೆ ತೋರಿಸಬೇಡಿ
ಬಲಿತಂತೆಲ್ಲ ಅವು ನಿಮ್ಮನ್ನೇ |
ಅಥವಾ ನಿಮ್ಮಂಥ ಎಷ್ಟೋ ತಾಯಿ ಅಕ್ಕ ತಂಗಿಯರನ್ನೇ
ಹರಿದು ಕಿತ್ತು ತಿನ್ನುತ್ತ ಹೋದರೆ
ಅಂಥ ರಕ್ಕಸಗಳ್ಳಿಗಳನ್ನು ಹಡೆದ ನಿಮ್ಮನ್ನು
ದೇಶದ ಹೆತ್ತಮ್ಮ ಕ್ಷಮಿಸಳು
*****
೧೦.೬.೮೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಕಶಾಸ್ತ್ರದ ಪಾಠಶಾಲೆ
Next post ಬಲ್ಪಿನ ಬೆಳಕು

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys